top of page

ಮಂಗಳೂರಿನಲ್ಲಿ ನಕಲಿ ಆಧಾರ್–ಆರ್‌ಟಿಸಿ ಸೃಷ್ಟಿ, ರಾಕೆಟ್ ಬಯಲು: ಐದು ಮಂದಿ ಅರೆಸ್ಟ್

  • Writer: Kudla Info
    Kudla Info
  • Sep 14
  • 1 min read
ree

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಸಿಸಿಬಿ ಘಟಕವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಗೂ ಆರ್‌ಟಿಸಿ ಸೃಷ್ಟಿಸುತ್ತಿದ್ದ ರಾಕೆಟ್ ಅನ್ನು ಬಯಲು ಮಾಡಿದ್ದು, ಐದು ಮಂದಿಯನ್ನು ಬಂಧಿಸಲಾಗಿದೆ. ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಮಾಹಿತಿ ನೀಡಿದಂತೆ, ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿವೆ. ಬಂಧಿತರಾದವರು ಅಬ್ದುಲ್ ರೆಹಮಾನ್ (46), ನಿಶಾಂತ್ ಕುಮಾರ್ (28), ನಿತಿನ್ ಕುಮಾರ್ (31), ಹಸನ್ ರಿಯಾಜ್ (46) ಹಾಗೂ ಮೊಹಮ್ಮದ್ ಹನೀಫ್ (39).


ಅಬ್ದುಲ್ ರೆಹಮಾನ್ ನಕಲಿ ದಾಖಲೆಗಳನ್ನು ಬಳಸಿಕೊಂಡು ಜಾಮೀನು ಪಡೆದಿರುವುದು ಪತ್ತೆಯಾಗುತ್ತಿದ್ದಂತೆ ತನಿಖೆ ಆರಂಭವಾಗಿ, ಸಿಸಿಬಿ ದೂರು ಆಧಾರವಾಗಿ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಕೊಡಿಯಲ್‌ಬೈಲ್‌ನ ಆನ್‌ಲೈನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ನಿಶಾಂತ್ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾದನು. ಆರೋಪಿಗಳು ತಮ್ಮ ಫೋಟೋಗಳನ್ನು ನಕಲಿ ಆಧಾರ್ ಕಾರ್ಡ್‌ಗಳಲ್ಲಿ ಅಂಟಿಸಿ ನ್ಯಾಯಾಲಯದಲ್ಲಿ ಜಾಮೀನು ಖಾತರಿದಾರರಾಗಿ ನಿಂತು, ಎರಡು ಕೊಲೆ ಪ್ರಕರಣಗಳು ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯಡಿ ದಾಖಲಾಗಿದ್ದ ಮತ್ತೊಂದು ಪ್ರಕರಣದಲ್ಲಿ ಜಾಮೀನು ಪಡೆಯಲು ಪ್ರಯತ್ನಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

 
 
 

Comments


bottom of page