top of page

ಲೌಡ್‌ಸ್ಪೀಕರ್ ನಿಷೇಧದಿಂದ ಕರಾವಳಿಯ ಯಕ್ಷಗಾನ-ಸಾಂಸ್ಕೃತಿಕ ವಲಯ ಸಂಕಷ್ಟ

  • Writer: Kudla Info
    Kudla Info
  • Sep 5
  • 1 min read
ree

ಮಂಗಳೂರು: ರಾತ್ರಿ ವೇಳೆ ಲೌಡ್‌ಸ್ಪೀಕರ್ ಬಳಕೆ ನಿಷೇಧದ ಕಟ್ಟುನಿಟ್ಟಿನ ಜಾರಿಯಿಂದ ಕರಾವಳಿ ಪ್ರದೇಶದ ಯಕ್ಷಗಾನ, ನಾಟಕ, ದೇವಾಲಯ ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದೊಡ್ಡ ಸಂಕಷ್ಟಕ್ಕೆ ಸಿಲುಕಿವೆ. ಕಲಾವಿದರು, ಧ್ವನಿ-ಬೆಳಕು ಹಾಗೂ ಶಾಮಿಯಾನ ವಲಯದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸೆಪ್ಟೆಂಬರ್ 9ರಂದು ಕದ್ರಿ ಗೋರಕ್ಷನಾಥ ಸಭಾಭವನದಲ್ಲಿ ಸಾರ್ವಜನಿಕ ಜಾಗೃತಿ ಸಭೆ ನಡೆಸಲಾಗುವುದಾಗಿ ಯಕ್ಷಗಾನ ಭಗವತ ಪಟ್ಲ ಸತೀಶ ಶೆಟ್ಟಿ ತಿಳಿಸಿದ್ದಾರೆ.


ಮಂಗಳೂರಿನಲ್ಲಿ ನಡೆದ ವಿಶ್ವಹಿಂದು ಪರಿಷತ್ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಲಾವಿದರು, “ಯಕ್ಷಗಾನ-ನಾಟಕಗಳು ಶತಮಾನಗಳಿಂದ ಬೆಳೆಯುತ್ತ ಬಂದಿವೆ. ಆದರೆ ಇಂದು ಧ್ವನಿಸಂಸ್ಥೆಯಿಲ್ಲದೆ ಕಾರ್ಯಕ್ರಮ ನಡೆಸುವುದು ಅಸಾಧ್ಯ. ನಿಯಮದ ಹೆಸರಿನಲ್ಲಿ ಕರಾವಳಿಯಲ್ಲೇ ಮಾತ್ರ ನಿರ್ಬಂಧ ಹೇರಲಾಗುತ್ತಿದೆ. ಹಬ್ಬ-ಜಾತ್ರೆಗಳ ಕಾಲಾರಂಭವಾಗುತ್ತಿರುವ ಸಂದರ್ಭದಲ್ಲಿ ಕಲಾ-ಸಂಸ್ಕೃತಿಯ ನಾಡಿಗೆ ಇದು ದೊಡ್ಡ ಹೊಡೆತ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Comments


bottom of page